tag:blogger.com,1999:blog-347407622024-03-28T06:40:47.202-07:00KHAJAANEAnnapoorna Daithotahttp://www.blogger.com/profile/05089949892568990494noreply@blogger.comBlogger114125tag:blogger.com,1999:blog-34740762.post-86449806466309423782024-03-27T05:52:00.000-07:002024-03-27T05:52:07.755-07:00ಯಾರು<p> </p><p>ಪೊಡವಿಯ ಅಡವಿಯ ಅಡ ಇಟ್ಟವರು ಯಾರು</p><p>ಅಡವಿಟ್ಟ ಅಡವಿಯ ಕಡ ಕಟ್ಟುವವರು ಯಾರು </p><p>ಬಗಲಲ್ಲೇ ಬಗೆಬಗೆ ಬಗೆದು ಬಗೆದವರು ಯಾರು</p><p>ಬಗೆದುದನ್ನು ಭರಿಸಲು ಹೆಗಲು ಕೊಟ್ಟವರು ಯಾರು</p><p><br /></p><p>ಅರಿವಿಗೆ ಅರಿವೆ ಹೊದೆಸಿ ಮುಚ್ಚಿಟ್ಟವರು ಯಾರು</p><p>ಅರಿವಿನ ಅರಿಯ ಅರಿಕೆಯನ್ನು ಅರಿತವರು ಯಾರು</p><p>ನುಡಿದಂತೆ ನಡೆಯನ್ನು ನಡೆದವರು ಯಾರು</p><p>ನುಡಿಯದೇ ನುಡಿಯನ್ನು ನುಡಿಸಿದವರು ಯಾರು</p><p><br /></p><p>ಬಿಸಿಲಲ್ಲಿ ಬಿಸಿ ಬಸಿದು ಬೀಸಿದವರು ಯಾರು</p><p>ಹಸಿದಲ್ಲಿ ಹಸಿಯ ಹಸಿ ಹಂಚಿದವರು ಯಾರು</p><p>ಕಾಲನನ್ನು ಮೆಟ್ಟಿ ಕಾಲ ಹೆಚ್ಚಿಸಿಕೊಂಡವರು ಯಾರು</p><p>ಸಾಲ ಸಾಲದೆಂದು ಸಾಲಲ್ಲಿ ನಿಂದವರು ಯಾರು</p><p><br /></p><p>ಬರದ ಬರವನ್ನು ಬರೆದು ತಿಳಿಸಿದವರು ಯಾರು</p><p>ಬರೆದ ಬರಹವನ್ನು ಅರ್ಥೈಸಿ ತಿಳಿದವರು ಯಾರು</p><p>ಓದಿನ ಒದವಿಗೆ ಒದವು ಒದಗಿಸಿದವರು ಯಾರು</p><p>ಆಡಿದಂತೆ ಆಡನ್ನು ಅಡ್ಡಾಡಿಸಿ ಕೈ ಆಡಿಸಿದವರು ಯಾರು </p><p><br /></p><p>ಮಡಕೆಯೊಳಗೆ ಮಡಕೆಯನ್ನು ಬೇಯಿಸಿದವರು ಯಾರು</p><p>ಪಟ್ಟುಬಿಡದೆ ಪಟ್ಟು ಹಾಕಲು ಪ್ರಯತ್ನ ಪಟ್ಟವರು ಯಾರು</p><p>ಪಡಿಯ ಪಡಿಪಡೆದು ಪಡಿಹಾಕಿ ಪಡಿಯೇರಿ ಪಡಿ ಮೆಟ್ಟಿದವರಾರು</p><p>ಅಡಿ ಮೇಲೆ ಅಡಿ ಇಟ್ಟು ಅಡಿಯಲ್ಲಿ ಅಡಗಿದವರು ಯಾರು</p><p><br /></p><p>ಹಲವೆಡೆ ಹಲವಿಟ್ಟು ಹಲವು ಸಲ ಉತ್ತವರು ಯಾರು</p><p>ಬೀಳು ಬೀಳದಂತೆ ಬೀಳುಗಳ ಬೆಳೆಸಿದವರು ಯಾರು</p><p>ಹರಿವ ಹರಿವನ್ನು ಹರಿದಂತೆ ಹರಿಸಿದವರು ಯಾರು</p><p>ಹರಿಯ ಹರವನ್ನು ಹರವಿಟ್ಟು ಹರಸಿದವರು ಯಾರು</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-13294524668520599802024-03-23T03:26:00.000-07:002024-03-23T04:00:43.119-07:00ಅಮ್ಮ ಜೀವ - ಅಪ್ಪ ಪ್ರಾಣ<p> </p><p>ಅಮ್ಮ ಜೀವವನ್ನು </p><p>ಹೊರುತ್ತಾಳೆ ಹೆರುತ್ತಾಳೆ</p><p>ಅಪ್ಪ ಅದನ್ನು ಹೊರುತ್ತಾನೆ </p><p>ಪ್ರಾಣ ಒದಗಿಸುತ್ತಾನೆ</p><p><br /></p><p>ಅಮ್ಮನೆಂಬ ಅಕ್ಕರೆ</p><p>ಅಪ್ಪನೆಂಬ ಅದ್ಭುತ</p><p>ಅಮ್ಮನ ಮಮತೆಯ ಮತ್ತು</p><p>ಅಪ್ಪನ ಮಾತುಗಳು ಮುತ್ತು</p><p><br /></p><p>ಅಮ್ಮ ನುಡಿಸುತ್ತಾಳೆ</p><p>ಅಪ್ಪ ನಡೆಸುತ್ತಾನೆ</p><p>ಅಮ್ಮ ಮುದ್ದು ಮಾಡುತ್ತಾಳೆ</p><p>ಅಪ್ಪ ತಿದ್ದಿ ತೀಡುತ್ತಾನೆ</p><p><br /></p><p>ಅಮ್ಮ ಓದಿಸಿ-ಬರೆಸಿ ಮಾಡುತ್ತಾಳೆ</p><p>ಅಪ್ಪ ಭವಿಷ್ಯವನ್ನು ಗಟ್ಟಿ ಮಾಡುತ್ತಾನೆ</p><p>ಅಮ್ಮ ಕೆಲವೊಮ್ಮೆ ಅಪ್ಪನಾಗುತ್ತಾಳೆ</p><p>ಅಪ್ಪ ಕೆಲವೊಮ್ಮೆ ಅಮ್ಮನಾಗುತ್ತಾನೆ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-71605104790561407922024-03-23T03:18:00.000-07:002024-03-25T08:00:33.296-07:00ವಿಪರ್ಯಾಸ<p> </p><p>ಕೆಟ್ಟದ್ದನ್ನು ಮಾಡಿದವರು ಮರೆತು ಬಿಡುತ್ತಾರೆ</p><p>ಅನುಭವಿಸಿದವರಿಗೆ ಅದು ನೆನಪಿರುತ್ತದೆ</p><p>ಒಳ್ಳೆಯದನ್ನು ಮಾಡಿದವರಿಗೆ ನೆನಪಿರುತ್ತದೆ</p><p>ಅನುಭವಿಸಿದವರು ಅದನ್ನು ಮರೆತು ಬಿಡುತ್ತಾರೆ</p><p><br /></p><p>ನಾನು ಏನೇ ಮಾಡಿದರೂ ಅದು ಸರಿ</p><p>ಬೇರೆಯವರು ಮಾಡಿದರೆ ಎಲ್ಲವೂ ತಪ್ಪು</p><p>ನಾನು ಮಾಡಿರುವುದಕ್ಕೆ ಕಾರಣವಿರುತ್ತದೆ</p><p>ಬೇರೆಯವರು ಅನಾವಶ್ಯಕವಾಗಿ ಮಾಡುತ್ತಾರೆ</p><p><br /></p><p>ನಾನು ಮಾಡುವುದೆಲ್ಲಾ ಧನಾತ್ಮಕ</p><p>ಇನ್ನೊಬ್ಬರು ಮಾಡುವುದೆಲ್ಲಾ ಋಣಾತ್ಮಕ</p><p>ಆಗಬೇಕಾಗಿರುವುದು ನನ್ನ ಜವಾಬ್ದಾರಿಯಲ್ಲ</p><p>ಮಾಡದಿರುವುದು ಅವರ ಬೇಜವಾಬ್ದಾರಿ</p><p><br /></p><p>ಬಿಸಿಲಿದ್ದರೆ ಮಳೆ ಬೇಕೆನಿಸುತ್ತದೆ</p><p>ಮಳೆ ಬಂದರೆ ಕಿರಿಕಿರಿಯಾಗುತ್ತದೆ</p><p>ಸೆಖೆಯಿದ್ದರೆ ಚಳಿಗಾಗಿ ಆಸೆ ಪಡುತ್ತೇವೆ</p><p>ಚಳಿಯಿದ್ದರೆ ಬಿಸಿಲಿಗಾಗಿ ಪರಿತಪಿಸುತ್ತೇವೆ</p><p><br /></p><p>ಎಲ್ಲವೂ ಸರಿಯಾಗಿದ್ದರೆ ಗೊಣಗುತ್ತೇವೆ</p><p>ಸರಿಯಿಲ್ಲದಿರುವಾಗ ಹೆಣಗುತ್ತೇವೆ</p><p>ನೆಮ್ಮದಿ ಬಿಟ್ಟು ಚಿಂತೆಯಿಂದ ಕೊರಗುತ್ತೇವೆ</p><p>ಕೆಟ್ಟಾಗ ಮತ್ತೊಬ್ಬರನ್ನು ತೆಗಳಿ ಕೃತಾರ್ಥರಾಗುತ್ತೇವೆ </p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-54123530321858011282024-03-23T02:56:00.000-07:002024-03-25T08:01:12.398-07:00ಆಸೆ - ವಾಸ್ತವ<p><br /></p><p>ಮನದಾಳದಲ್ಲಿ ಹುದುಗಿದ ಆಸೆಗಳಲ್ಲಿ ಹುಡುಕಿದೆ</p><p>ಆಸ್ಥೆಯಿಂದ ಆಯ್ದು ಬೆಲೆಬಾಳುವುದನ್ನು ಹೊರತೆಗೆದೆ</p><p>ಅಕ್ಕಿ ಆರಿಸಿದಂತೆ ಹೆಕ್ಕಿ ತೆಗೆದ ಅಮೂಲ್ಯ ಆಸೆಯನ್ನು </p><p>ಕೊಕ್ಕಿನಲ್ಲಿ ಹಿಡಿದಂತೆ ಹಿಡಿದು ಆಕಾಶಕ್ಕೆ ಏರಿದೆ</p><p><br /></p><p>ಆಕಾಶದೆತ್ತರದಿಂದ ನೋಟವ ಕೆಳ ಹರಿಸಿದಾಗ</p><p>ಭೂಮಿ ತುಂಬಾ ಹಸಿರು ಕಂಡೆ, ಸಂತೋಷಗೊಂಡೆ</p><p>ಪ್ರಾಣಿಗಳ ಮತ್ತು ಮನುಜನ ಪ್ರಪಂಚ ಬೇರೆಬೇರೆ</p><p>ಎಂಬುದನ್ನು ಬಹು ಸ್ಪಷ್ಟವಾಗಿ ನಾ ಕಂಡುಕೊಂಡೆ</p><p><br /></p><p>ಪ್ರಕೃತಿಯ ಫಲಕದಲ್ಲಿ ಹರಿವ ಪವಿತ್ರ ಪನ್ನೀರು </p><p>ಖಗಮೃಗಗಳ ಬದುಕಿನಲ್ಲಿ ನೆಮ್ಮದಿಯ ಉಸಿರು </p><p>ಮನುಜನ ಮನಸು ಹೃದಯದಲ್ಲಿ ಸದಾ ಒಸರುವ,</p><p>ಕೂಡಿ ಬಾಳುವಂಥ ಸದ್ಬುದ್ಧಿ ಚಿಲುಮೆಯ ತೇರು</p><p><br /></p><p>ಸಾಮರಸ್ಯವೇ ಸರ್ವಸ್ವವೆಂಬ ತಿಳಿವಿನ ಮಾತು</p><p>ಜೊತೆಗೂಡಿ ಬಾಳುವುದರ ಅರ್ಥವೇ ಒಳಿತು</p><p>ಇದನ್ನರಿತುಕೊಂಡಿದ್ದರದೇ ಸಕಲ ಸಂಪತ್ತು</p><p>ಕೈಬಿಟ್ಟಾಗ ಆಕಾಶದಲ್ಲಿರುವ ಆಸೆಗೆ ಬೆಂಕಿಯ ಕುತ್ತು</p><p><br /></p><p>ಬೆಂಕಿ ಹಿಡಿದ ಆಸೆ ಹೊತ್ತು ಕೆಳಗಿಳಿಯುವ ಹೊತ್ತು</p><p>ಇಳಿಯುತ್ತಿದ್ದಂತೆಯೇ ಕಾಣುತ್ತಿತ್ತು ವಾಸ್ತವದ ಕೈತುತ್ತು</p><p>ಹಸಿರ ಕೇಶದ ನಡುನಡುವೆ ಬೋಳು ಭೂ-ತಲೆ</p><p>ಕಾಡಲ್ಲೆಲ್ಲಾ ಅಭಿವೃದ್ಧಿ ಭೂತದ ಅಬ್ಬರ ದಾಂಧಲೆ</p><p><br /></p><p>ಪ್ರಾಣಿಪಕ್ಷಿಗಳ ಅಸಹಾಯಕ ಆತಂಕದೊಂದಿಗೆ,</p><p>ತನ್ನದೇ ಕಾಲಿಗೆ ಕೊಡಲಿಯಿಟ್ಟು, ಭವಿಷ್ಯವನ್ನು</p><p>ಪಣಕ್ಕಿಟ್ಟು, ಅರಚಿ-ಕಿರುಚಿ ಪರದಾಡುವ ಮನುಷ್ಯನ </p><p>ಬುದ್ಧಿಗೇಡಿತನದ ಪರಮಾವಧಿಯ ಪೆಟ್ಟು</p><p><br /></p><p>ಗಿಡವಿಲ್ಲ ಮರವಿಲ್ಲ ಕಾಡೂ ಇಲ್ಲ ಹಸಿರಿಲ್ಲ </p><p>ಕುಡಿಯಲು ನೀರಿಲ್ಲ ಎಸರಿಡಲೂ ಗತಿಯಿಲ್ಲ</p><p>ಮುಂದಿನ ಪೀಳಿಗೆಗೆ ನೀಡಲು ಒಳ್ಳೆಯ ಹೆಸರಿಲ್ಲ</p><p>ಪಾಪಪ್ರಜ್ಞೆ ಬಿಟ್ಟು ಬೇರೇನೂ ಉಳಿಯುತ್ತಿಲ್ಲ</p>Annapoorna Daithotahttp://www.blogger.com/profile/05089949892568990494noreply@blogger.com1tag:blogger.com,1999:blog-34740762.post-13065583065795486422024-03-16T06:50:00.000-07:002024-03-16T06:50:07.065-07:00ದಾರಿಯುದ್ದಕ್ಕೂ<p> </p><p>ಬೆಟ್ಟ ಬೆಟ್ಟಗಳ ಮೇಲೆ </p><p>ಬಟ್ಟೆ ಹರಡಿದಂತೆ ನೀಲಾಕಾಶ</p><p>ಭೂಮಿ ತಾಯಿ ಹಸಿರುಟ್ಟಂತೆ </p><p>ನಡುವೆ ಹೊಲಗಳ ವಿಶೇಷ </p><p><br /></p><p>ಇರುವೆಗಳ ಸಾಲಿನಂತೆ </p><p>ವಾಹನಗಳ ಓಡಾಟ</p><p>ಬಿಸಿಯುಗುಳುವ ಚೆಂಡಿನಂತೆ</p><p>ಆ ಸೂರ್ಯನ ಆಟೋಟ</p><p><br /></p><p>ತೆಂಗಿನ ಮರಗಳು, ಬಾಳೆಯ ಗಿಡಗಳು</p><p>ಕಾಫಿಯ ತೋಟದಿ ಅರಳಿದ ಹೂಗಳು</p><p>ಇಕ್ಕೆಲದಲ್ಲೂ ಪುಟ್ಟಪುಟ್ಟ ಮನೆಗಳು</p><p>ಅಲ್ಲಲ್ಲಿ ಕೆಲವೊಂದು ಅಂಗಡಿಗಳು</p><p><br /></p><p>ಸೂರ್ಯಾಸ್ತದಲ್ಲಿ ತಂಪಾದ ಗಾಳಿ</p><p>ರಾತ್ರಿಯಲ್ಲಿ ಸುಳಿದ ತಂಗಾಳಿ</p><p>ನಿಶಾರಾಣಿ ಸುಂದರವಾಗಿ ಅರಳಿ</p><p>ಸುವಾಸನೆ ಸುತ್ತಿತು ಸುರುಳಿ ಸುರುಳಿ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-60877053006623052782024-03-15T01:21:00.000-07:002024-03-15T01:21:43.671-07:00ಎಚ್ಚರಿಕೆ<p> </p><p>ಕೆಟ್ಟದೆಂಬುದರ ಕಟ್ಟಿಡದಿದ್ದರೆ</p><p>ಅದು ಒಳ್ಳೆಯದರ ಕತ್ತು ಹಿಸುಕಬಹುದು</p><p>ಕೆಟ್ಟದೆಂಬುದು ಒಳ್ಳೆಯದನ್ನು ಮೆಟ್ಟಿ ನಿಂದರೆ</p><p>ಒಳ್ಳೆಯದರ ಉಸಿರು ನಿಲ್ಲಬಹುದು</p><p><br /></p><p>ಅಸತ್ಯವನ್ನು ಅರಳಲು ಬಿಟ್ಟರೆ</p><p>ಸತ್ಯವು ಅಲ್ಲಿಯೇ ಮುದುಡಬಹುದು</p><p>ಅಸತ್ಯವು ಸತ್ಯವನ್ನು ಕುಗ್ಗಿಸಿದರದು</p><p>ಸವಾಲಾಗಿ ಪರಿಣಮಿಸ ಬಹುದು</p><p><br /></p><p>ಅಸುರರಿಗೆ ಅವಕಾಶ ಕೊಟ್ಟರೆ </p><p>ಅಳತೆ ಮೀರಿ ಅಂಧಕಾರ ಮುಸುಕಬಹುದು</p><p>ಅಸುರರ ಅಟ್ಟಹಾಸ ತಾರಕಕ್ಕೇರಿದರೆ</p><p>ದೇವತೆಗಳ ಸ್ವರ ಕೇಳದಾಗಬಹುದು</p><p><br /></p><p>ನಮ್ಮ ನಾವು ತಿದ್ದಿಕೊಳ್ಳದಿದ್ದರೆ</p><p>ಬೇರೆಯವರು ದೂರವಾಗ ಬಹುದು</p><p>ಬೇರೆಯವರ ಸ್ನೇಹವಿಲ್ಲದಿದ್ದರೆ</p><p>ಬದುಕು ಬರಡು ಎನಿಸ ಬಹುದು</p><p><br /></p><p>ಅರ್ಥವಾಗಿ ಎಚ್ಚೆತ್ತುಕೊಳ್ಳದಿದ್ದರೆ</p><p>ಸಮಯ ಜಾರಿ ಹೋಗಬಹುದು</p><p>ಇರುವ ಸಮಯವ ಬಳಸದಿದ್ದರೆ </p><p>ಬದುಕಿದ್ದೂ ವ್ಯರ್ಥವೆನಿಸಬಹುದು </p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-63773206291601082752024-03-12T08:01:00.000-07:002024-03-12T08:01:00.997-07:00ಹನಿ ಹನಿ ಕೂಡಿದರೆ<p><br /></p><p>ಒಂದು ಬೀಜ ಒಂದು ಮರ</p><p>ಒಂದು ಮರದಿಂದ ಹಲವು ಬೀಜ</p><p>ಹಲವು ಬೀಜಗಳು ಬೆಳೆದು ಹಲವು ಮರ</p><p>ಹಲವು ಮರಗಳಿಂದ ಕಾಡು</p><p><br /></p><p>ಒಂದು ಪಾದ ಒಂದು ಹೆಜ್ಜೆ</p><p>ಒಂದೊಂದೇ ಹೆಜ್ಜೆ ಸೇರಿ ಹಲವು ಹೆಜ್ಜೆ</p><p>ಹಲವು ಹೆಜ್ಜೆಗಳು ಸೇರಿ ಕೆಲವು ಮೈಲು</p><p>ಕೆಲವು ಮೈಲುಗಳು ಸೇರಿ ಪಯಣ</p><p><br /></p><p>ಒಂದು ನಲ್ಲಿ ಒಂದು ಹನಿ ನೀರು</p><p>ಒಂದೊಂದೇ ಹನಿ ಸೇರಿ ಒಂದು ಬೊಗಸೆ </p><p>ಬೊಗಸೆ ಬೊಗಸೆ ಸೇರಿ ಹಲವು ತಂಬಿಗೆ</p><p>ಹಲವು ತಂಬಿಗೆಗಳಿಂದ ಬಾಲ್ಡಿ ನೀರು</p><p><br /></p><p>ಒಂದು ನಾಣ್ಯ ಒಂದು ಪೈಸೆ</p><p>ಪೈಸೆ ಪೈಸೆಗಳು ಸೇರಿ ಒಂದು ರೂಪಾಯಿ</p><p>ಕೆಲವು ರೂಪಾಯಿಗಳು ಸೇರಿ ನೂರು ರೂಪಾಯಿ</p><p>ನೂರಾರು ರೂಪಾಯಿಗಳು ಸೇರಿ ಸಾವಿರಾರು</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-7394437665097095482024-03-11T01:33:00.000-07:002024-03-11T06:00:54.080-07:00ಅನುಭವ ಸತ್ಯ<p> </p><p>ಗೋಡೆ ಬದಿಯ ಮಣ್ಣಿಗೆ ನೀರೆರಚಿ ನೋಡಿ</p><p>ಮಣ್ಣು ಸಿಡಿದು ಗೋಡೆ ಕೆಸರಾಗುತ್ತದೆ</p><p>ಮನಸಿಗೆ ಒಂಥರಾ ಖುಷಿ ಎನಿಸುತ್ತದೆ</p><p><br /></p><p>ಅದೇ ಗೋಡೆಗೆ ನೀರೇರಚಿ ನೋಡಿ</p><p>ಸಂಪೂರ್ಣ ತೊಳೆದು ಶುಭ್ರವಾಗುತ್ತದೆ</p><p>ಮೊದಲಿಗಿಂತ ಮಿಗಿಲಾದ ಖುಷಿ ಸಿಗುತ್ತದೆ</p><p><br /></p><p>ತಿಳಿಗೊಳಕ್ಕೊಂದು ಕಲ್ಲೆಸೆದು ನೋಡಿ</p><p>ಅಲೆಅಲೆಯಾಗಿ ಉಂಗುರಗಳು ಏಳುತ್ತವೆ </p><p>ಮನಸಿಗೆ ಮುದವೆನಿಸುತ್ತದೆ</p><p><br /></p><p>ಅಲೆಯ ಉಂಗುರಗಳು ಅಳಿದು</p><p>ಕೊಳವು ತಿಳಿಯಾಗುವುದನ್ನು ನೋಡಿ</p><p>ಮನಸ್ಸು ತಲ್ಲಣ ರಹಿತ ಸುಖ ಪಡೆಯುತ್ತದೆ</p><p><br /></p><p>ತೊಳೆದಾಗ, ತಿಳಿಗೊಂಡಾಗ ದೊರಕುವುದು</p><p>ಕಲಕಿ ಕದಡಿದಾಗ, ಕೆಸರೆರಚಿದಾಗ ಸಿಗುವುದಿಲ್ಲ </p><p>ಎಂಬದು ಅನುಭವ ಸತ್ಯ, ಅದನು ಅರಿತು ನೋಡಿ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-25403131535756934662024-03-08T01:15:00.000-08:002024-03-08T04:37:32.890-08:00ನೆಮ್ಮದಿ<p><br /></p><p>ಇಷ್ಟು ದಿನ ಎಲ್ಲಿದ್ದೆ ನೀನು</p><p>ಮೊದಲೇ ಯಾಕೆ ಕಾಣಲಿಲ್ಲ</p><p>ಎಲ್ಲಿಯೂ ಯಾಕೆ ಸಿಗಲಿಲ್ಲ</p><p><br /></p><p>ಇಂದು ನೀನು ಎಲ್ಲಿಂದ ಬಂದೆ</p><p>ನನ್ನೊಡನೆಯೇ ಇರುವೆನೆಂದೆ</p><p>ಚಿಂತೆಗೆ ತರ್ಪಣ ಬಿಟ್ಟೆನೆಂದೆ</p><p><br /></p><p>ಗುರಿಯ ದಾರಿ ತೋರುವೆ ಎಂದೆ </p><p>ಅದರ ಕಡೆಗೆ ನಡೆಸುವೆ ಎಂದೆ</p><p>ಸದಾ ನನ್ನ ಹಿಂದೆ ಮುಂದೆ</p><p><br /></p><p>ಸುತ್ತುತಿರುವೆ ಇನ್ನು ಮುಂದೆ</p><p>ನಾವಿನ್ನೆಂದಿಗೂ ಒಂದೇ ಎಂದೆ</p><p>ನೀನೇ ಆದಿ ಅಂತ್ಯವೆಂದೆ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-26602363641947785252024-03-08T00:47:00.000-08:002024-03-08T00:47:22.374-08:00ಅಮ್ಮ - ಮಗು<p> </p><p>ಬಿಗಿಯಾದ ದಿರಿಸ ಧರಿಸಿ</p><p>ಕಷ್ಟ ಬರಿಸಿ ಅದನು ಭರಿಸಿ</p><p>ಬೆವರು ಸುರಿಸಿ ಮತ್ತೆ ಒರೆಸಿ</p><p>ದೂರ ಸರಿಸಿ ದುಃಖ ಮರೆಸಿ</p><p><br /></p><p>ಅಪ್ಪನರಸಿ - ಅಮ್ಮ ನ ಅರಸಿ </p><p>ಭಾರ ಹೊರಿಸಿ ಕಣ್ಣು ತೂಗಿಸಿ </p><p>ಹಾಲು ತರಿಸಿ ಅದನು ಕುದಿಸಿ</p><p>ತಣಿಸಿ ಕುಡಿಸಿ ಸಮಾಧಾನಗೊಳಿಸಿ </p><p><br /></p><p>ದಿರಿಸ ತೆಗೆಸಿ ಒಗೆಸಿ ಒಣಗಿಸಿ</p><p>ಕಪಾಟಿಗೆ ಸೇರಿಸಿ ಬೀಗ ಜಡಿಸಿ</p><p>ಊಟ ಬಡಿಸಿ ತಿನ್ನಿಸಿ, ಬಾಯಿ ತೊಳೆಸಿ </p><p>ಮಲಗಿಸಿ ಹೊದಿಕೆ ಹೊದೆಸಿ</p><p><br /></p><p>ನೆತ್ತಿಗೊಂದು ಮುತ್ತನಿರಿಸಿ</p><p>ಜೋಗುಳ ಹಾಡಿ ನಿದ್ದೆಗೆಳೆಸಿ</p><p>ಸ್ವಪ್ನದಲ್ಲಿ ತೇಲಿಸಿ, ಮನಸಾರೆ ಹರಸಿ</p><p>ಬೆಳಗ್ಗೆ ಎಬ್ಬಿಸಿ ದಿರಿಸ ಧರಿಸಿ...</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-49068252599191120352024-03-07T22:10:00.001-08:002024-03-07T22:10:53.239-08:00ಕಾಲನ ಕೈವಾಡ<p> </p><p>ಬೆರಳಲ್ಲಿ ಬೆಳೆ ಕಡಿತಗೊಂಡಿದೆ</p><p>ಮನದಲ್ಲಿ ಮರುಳು ಹೆಚ್ಚಾಗಿದೆ</p><p>ತನುವಲ್ಲಿ ಜಡ ತುಂಬಿಕೊಂಡಿದೆ</p><p><br /></p><p>ಕಣ್ಣುಗಳಿಗೆ ಕಿಸುರು ತಡವಿದೆ </p><p>ಕಾಲುಗಳ ಕೆರೆತ ಹೆಚ್ಚಾಗಿದೆ</p><p>ಕೈಗಳ ಕಸುವು ಕಡಿಮೆಯಾಗಿದೆ</p><p><br /></p><p>ತಲೆಯಲ್ಲಿ ಚಿಂತೆ ವಿಪುಲವಾಗಿದೆ </p><p>ಬಾಯಲ್ಲಿ ಬೈಗುಳ ಹೇರಳವಾಗಿದೆ</p><p>ಒಳ್ಳೆಯ ಮಾತು ಮರೆತೇ ಹೋಗಿದೆ</p><p><br /></p><p>ಕೂದಲೂ ಹಲ್ಲೂ ಉದುರಿ ಹೋಗಿದೆ</p><p>ಕಾಲನ ಕೈವಾಡ ಎದ್ದು ಕಾಣುತ್ತಿದೆ</p><p>ಉಸಿರು ನಿತ್ಯ ದಿನಗಳ ಎಣಿಸುತ್ತಿದೆ </p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-63971147944325433662024-03-07T22:10:00.000-08:002024-03-07T22:10:01.053-08:00ಇವಳು<p> </p><p>ಉತ್ತಿ ಬಿತ್ತಿ ಬೆಳೆಯನೆತ್ತಿ</p><p>ಮಂದಿಗೆಲ್ಲ ಕಟ್ಟಿ ಬುತ್ತಿ</p><p>ಹೆಮ್ಮೆಯಿಂದ ತಲೆಯನೆತ್ತಿ</p><p>ನಡೆಯುವಳು ಗಟ್ಟಿಗಿತ್ತಿ</p><p><br /></p><p>ಮುಂಜಾನೆದ್ದು ಮನೆಯ ಬಿಟ್ಟು</p><p>ವಾಹನದಲ್ಲಿ ಜೀವವಿಟ್ಟು </p><p>ದುಡಿಮೆಗೆ ತಕ್ಕ ಸಮಯ ಕೊಟ್ಟು</p><p>ಗಳಿಸುವಳು ಹೊಟ್ಟೆಗೆ ಹಿಟ್ಟು</p><p><br /></p><p>ದೇಶವನ್ನು ಆಳಿದವಳು</p><p>ವಿಮಾನವನ್ನು ಏರಿದವಳು</p><p>ಬಾಹ್ಯಾಕಾಶಕೆ ಹಾರಿದವಳು</p><p>ವಿಜ್ಞಾನದಲ್ಲಿ ಮುನ್ನಡೆದವಳು</p><p><br /></p><p>ನಾಡಿ ಹಿಡಿದ ವೈದ್ಯೆಯಿವಳು</p><p>ವಿದ್ಯೆಯನ್ನು ಹಂಚಿದವಳು</p><p>ತಂತ್ರಜ್ಞಾನ ಪಡೆದವಳು</p><p>ಯಂತ್ರ ಚಾಲನೆಗೆ ನಿಂದವಳು</p><p><br /></p><p>ಸಂಗೀತ ವಿದುಷಿಯಿವಳು</p><p>ನೃತ್ಯವನ್ನು ಮಾಡಿದವಳು</p><p>ಕ್ರೀಡೆಯಲ್ಲಿ ಭಾಗವಹಿಸಿ</p><p>ಚಿನ್ನವನ್ನು ಗೆದ್ದವಳು</p><p><br /></p><p>ಮಂತ್ರವನ್ನು ಪಠಿಸುವಳು</p><p>ಪೂಜೆಯನ್ನು ಮಾಡುವಳು</p><p>ವಿವಿಧ ಖಾದ್ಯ ಕಜ್ಜಾಯಗಳ</p><p>ಅಡುಗೆ ಮಾಡಿ ಬಡಿಸುವಳು</p><p><br /></p><p>ವ್ಯವಹಾರದಲ್ಲಿ ಎಂದಿಗೂ ಮುಂದು</p><p>ಸಂಸಾರದಲ್ಲಿ ಬೆನ್ನೆಲುಬಾಗಿ ನಿಂದು</p><p>ಮಮತೆಯ ಮಾತೆ ಅಂದೂ ಇಂದೂ</p><p>ಇವಳು ಎಲ್ಲರಿಗೂ ಪ್ರಿಯ ಬಂಧು</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-74579676005910569942024-02-21T09:30:00.000-08:002024-03-07T13:49:16.458-08:00ನಾಲ್ಕು ದಿನಗಳ ಪಯಣ<p> </p><p>ನಾಲ್ಕು ದಿನಗಳ ಈ ಪಯಣದಲ್ಲಿ</p><p>ನಾಲಗೆ ಹರಿಬಿಟ್ಟು ಜಗಳವೇಕೆ</p><p>ಇಹ ಮರೆತು ಹೊಡೆದಾಡುವುದೇಕೆ</p><p><br /></p><p>ದಾರಿಯಲ್ಲಿ ಒಳ್ಳೆಯ ಮಾತಾಡುವುದಿಲ್ಲವೇಕೆ</p><p>ದಾಸನಾಗು ವಿಶೇಷನಾಗು ಎಂಬುದು</p><p>ಯಾರಿಗೂ ಹಿಡಿಸುವುದಿಲ್ಲವೇಕೆ </p><p><br /></p><p>ಎಲ್ಲಾ ಬೆರಳುಗಳೂ ಒಂದೇ ಅಳತೆಯವಲ್ಲ </p><p>ಎಂಬುದನ್ನು ಅರಿಯುವುದಿಲ್ಲವೇಕೆ</p><p>ಹೊಂದಿಕೊಂಡು ಬದುಕುವುದಿಲ್ಲವೇಕೆ</p><p> </p><p>ಅಂತ್ಯದಲ್ಲಿ ಆರಡಿ ಮೂರಡಿಯೆಂದು ತಿಳಿದಿದ್ದರೂ</p><p>ಮದವೇರಿ ಮಿತಿಮೀರಿ ಕಿತ್ತಾಡುವುದೇಕೆ </p><p>ನಮ್ಮವರಿಂದಲೇ ನಾವು ದೂರವಾಗುವುದೇಕೆ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-15619911849511290462024-02-18T09:47:00.000-08:002024-02-18T10:12:59.645-08:00ಯಾವುದು ಯಶಸ್ಸು ?<p> </p><p>ಸಾವಿರಸಾವಿರ, ಕೋಟಿಕೋಟಿ ಗಳಿಸಿ</p><p>ಸ್ವಂತದವರಿಗೂ ನೀಡದೇ ಉಳಿಸಿ</p><p>ಸಹಾಯ ಕೇಳಿ ಬಂದರೂ ಕಡೆಗಣಿಸಿ, </p><p>ಕೊನೆಯಲ್ಲಿ ನಿತ್ಯ ರೋಗಗಳಿಗೆ ಹಣವುಣಿಸಿ,</p><p>ನೆಮ್ಮದಿಯಿಲ್ಲದೇ ತೊಳಲುವುದೇ ?</p><p><br /></p><p>ಒಡಹುಟ್ಟು, ರಕ್ತ ಸಂಬಂಧಿಗಳ ಕಷ್ಟಗಳಿಗೆ </p><p>ಕಿವುಡು-ಕುರುಡಾಗಿ, ತಮ್ಮ ಕೈಕಾಲು-ಕತ್ತಿಗೆ </p><p>ವಿವಿಧ ಆಭರಣಗಳ ಹೇರಿ, ಮಹಡಿ ಮೇಲೆ ಮಹಡಿ </p><p>ಕಟ್ಟಿ, ಸಂಕಷ್ಟದಲ್ಲಿರುವರನ್ನು ಕರೆದು ಆಡಂಬರ</p><p>ಪ್ರದರ್ಶನ ಮಾಡುವ, ಹೀನ ಮನಸ್ಸಿನ ಹುಸಿತನವೇ ?</p><p><br /></p><p>ಸೂರಿಲ್ಲದೇ, ಆಸರೆಯಿಲ್ಲದೇ ಹೊತ್ತಿನ ತುತ್ತಿಗಾಗಿ </p><p>ಪರದಾಡುವವರಿಗೆ, ಮೈಹಿಡಿಯಾಗಿ ಬೇಡುವವರಿಗೆ, </p><p>ನಿಸ್ವಾರ್ಥದಿಂದ ನೆಲೆ-ಜಲ ನೀಡಿ ಕೈಹಿಡಿದು</p><p>ಅನಾಥ ಮಕ್ಕಳಿಗೆ ತಂದೆ-ತಾಯಿಯಾಗಿ ಪ್ರೀತಿ ನೀಡಿ</p><p>ಹಿರಿಜೀವಗಳಿಗೆ ಮಕ್ಕಳಾಗಿ ಸೇವೆ ಮಾಡುವುದೇ ?</p><p><br /></p><p>ಸಾಕುವ ತೀಟೆ ತೀರಿದಾಗ, ಆರೋಗ್ಯ ತಪ್ಪಿದಾಗ,</p><p>ಕಂಡವರ ಮನೆ ಮುಂದೆ, ನಿಲ್ದಾಣಗಳಲ್ಲಿ,</p><p>ಬೀದಿಗಳಲ್ಲಿ ಬಿಟ್ಟು ಕೈತೊಳೆದುಕೊಳ್ಳುವ</p><p>ಪಾಪಿಗಳ ಅಸಡ್ಡೆಗೆ ಒಳಗಾದ, ಮೂಕ</p><p>ಪ್ರಾಣಿಗಳ ಹೊಟ್ಟೆ ತುಂಬಿಸಿ ಸಲಹುವುದೇ ?</p><p><br /></p><p>ಬೆವರು ಹರಿಸಿ, ರಕ್ತ ಸುರಿಸಿ, ಕರ್ಮಯೋಗಿಗಳಾಗಿ</p><p>ದುಡಿದು, ತಮ್ಮಾಸೆಗಳಿಗೆ ಕಡಿವಾಣ ಬಿಗಿದು, </p><p>ಒಂದೇ ಹೊತ್ತು ಉಂಡುಕೊಂಡು, ತಮ್ಮ</p><p>ಉದರಕ್ಕೆ ತಣ್ಣೀರ ಬಟ್ಟೆ ಬಿಗಿದುಕೊಂಡು,</p><p>ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ?</p><p><br /></p><p>ಅಕ್ಷರ ಕಲಿಕೆಯ ವಿದ್ಯೆ ಇಲ್ಲದಿದ್ದರೂ</p><p>ತಮಗೆ ಬರುವ ಅಲ್ಪ ಕಾಸಿನಲ್ಲಿಯೂ ಪಾಲು </p><p>ತೆಗೆದಿರಿಸಿ, ಎಲ್ಲಾ ಅಡ್ಡಿಗಳನ್ನೂ ಎದುರಿಸಿ, </p><p>ಶುದ್ಧ ಮನೋಭಾವದೊಂದಿಗೆ ಆಸ್ಪತ್ರೆ ಕಟ್ಟಿಸಿ, </p><p>ಸಾರ್ವಜನಿಕರಿಗೆ ಸಮರ್ಪಿಸುವುದೇ ?</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-80734836498913394722024-02-18T09:21:00.000-08:002024-02-18T09:21:02.147-08:00ಆತ್ಮದ ಪಯಣ<p> </p><p>ದಿನಾಂಕ ಬರೆದರೆ ದಿನದ </p><p>ಮಹತ್ವ ನೆನಪಾಗುತ್ತದೆ</p><p>ದಿನದ ಮಹತ್ವ ನೆನಪಾದರೆ</p><p>ಸಂಬಂಧ ಉಳಿದು ಬೆಳೆಯುತ್ತದೆ</p><p><br /></p><p>ಸಂಬಂಧ ಉಳಿದು ಬೆಳೆದರೆ</p><p>ಬದುಕು ಹಗುರವಾಗುತ್ತದೆ</p><p>ಬದುಕು ಹಗುರವಾದರೆ</p><p>ಬದುಕಿದ್ದೂ ಸಾರ್ಥಕವೆನಿಸುತ್ತದೆ</p><p><br /></p><p>ಸಾರ್ಥಕವಾದ ಬದುಕು</p><p>ಮನಸಿಗೆ ನೆಮ್ಮದಿ ತರುತ್ತದೆ</p><p>ನೆಮ್ಮದಿಯ ಮನಸ್ಸು</p><p>ಆತ್ಮಕ್ಕೆ ತೃಪ್ತಿ ನೀಡುತ್ತದೆ</p><p><br /></p><p>ತೃಪ್ತ ಆತ್ಮದ ಪಯಣ</p><p>ಸುಖಕರವಾಗುತ್ತದೆ</p><p>ಸುಖಕರ ಪಯಣವು </p><p>ಮೋಕ್ಷವನ್ನು ಒದಗಿಸುತ್ತದೆ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-39670970684049963482024-02-10T06:26:00.000-08:002024-02-10T06:26:21.538-08:00ಹಾರುವ ಕುದುರೆ<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg4uAu9q57fxvtFWcsx9CKecGz97X4R59gsYq__bizvkwO1I_wMlLL3aA9jjS2mY7-uSDq1_XD43Bxm3hvTCrEOpVgteFUn7ga-V-yGqMPb1wZUHJd5mlwN0CFrfCFjs5lbWLIY_Lsb439_3e5iavkd4qDEUD0PiDFTjXVs6E7HOL7juiqusGD8/s800/pegasus.jpg" style="margin-left: 1em; margin-right: 1em;"><img border="0" data-original-height="500" data-original-width="800" height="91" src="https://blogger.googleusercontent.com/img/b/R29vZ2xl/AVvXsEg4uAu9q57fxvtFWcsx9CKecGz97X4R59gsYq__bizvkwO1I_wMlLL3aA9jjS2mY7-uSDq1_XD43Bxm3hvTCrEOpVgteFUn7ga-V-yGqMPb1wZUHJd5mlwN0CFrfCFjs5lbWLIY_Lsb439_3e5iavkd4qDEUD0PiDFTjXVs6E7HOL7juiqusGD8/w162-h91/pegasus.jpg" width="162" /></a></div><div class="separator" style="clear: both; text-align: center;">ಚಿತ್ರ: ಗೂಗ್ಲ್ನಿಂದ</div><p>ಹಾರುತ್ತದೆ ಹಾರುವ ಕುದುರೆ</p><p>ಏರುತ್ತದೆ ಏರಿಯ ಚದುರೆ</p><p>ಬೀರುತ್ತದೆ ನೋಟವ ಓರೆ</p><p>ವಯ್ಯಾರದಲಿ ತಿರುವುತ್ತ ಮೋರೆ</p><p><br /></p><p>ಕೆಲವೊಮ್ಮೆ, ಹಿಡಿತ ಮೀರಿ ಹಾರುತ್ತದೆ</p><p>ಮಿಡಿತದೊಂದಿಗೆ ಓಡುತ್ತದೆ</p><p>ಹಿರಿಯರಿಗೆ ಸಡ್ಡು ಹೊಡೆಯುತ್ತದೆ</p><p>ಕಿರಿಯರಿಗೆ ಗುದ್ದು ನೀಡುತ್ತದೆ</p><p><br /></p><p>ಮಿಗಿಲಿಲ್ಲವೆಂಬಂತೆ ಕುಣಿಯುತ್ತದೆ</p><p>ಬುದ್ಧಿ ಮಾತುಗಳಿಗೆ ಬೆನ್ನು ಹಾಕುತ್ತದೆ</p><p>ಜಗವನ್ನೇ ಗೆದ್ದೆನೆಂಬಂತೆ ಮೆರೆಯುತ್ತದೆ</p><div>ತಾನೊಂದು ಅಣು ಮಾತ್ರವೆಂಬುದರ ಮರೆಯುತ್ತದೆ</div>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-50194556521852446092024-02-08T21:00:00.000-08:002024-02-08T21:00:52.759-08:00ಹುಚ್ಚುತನ<p> </p><p>ಕ್ಷಮಿಸಿ, ಈಗ ಹುಟ್ಟುತ್ತಿಲ್ಲ ಕವನ</p><p>ಶ್ರಮಿಸಿ ಶೋಧಿಸಿದರೂ ಸಿಗದೆಂಬ ನೆವನ</p><p>ಭ್ರಮಿಸಿ ಬರೆಯಲು ಬಿಡುತ್ತಿಲ್ಲ ಈ ಮನ</p><p><br /></p><p>ಇಂಧನವಿಲ್ಲದೆ ಚಲಿಸದು ವಾಹನ</p><p>ಪದಗಳಿಲ್ಲದೆ ಕೂಡಿ ಬರದು ಕವನ</p><p>ಕಳಪೆಯಾದರೆಂದು ಒಳಗೊಳಗೇ ಕಂಪನ</p><p><br /></p><p>ಬರೆಯಲೇ ಬೇಕೆಂಬ ಹುಚ್ಚುತನ </p><p>ಒಟ್ಟಾರೆ ಬರೆದರೆ ನಗುತ್ತಾರೆ ಜನ</p><p>ನಕ್ಕರೇನಂತೆ, ಅದೇ ಅಲ್ಲವೇ ಜೀವನ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-18346647540463639902024-01-31T04:17:00.000-08:002024-01-31T04:17:05.955-08:00ನೀರ ಮೇಲಿನ ಗುಳ್ಳೆ<p> </p><p>ಅಲ್ಲಿ ಚುಕ್ಕೆಯಿದೆ ಎಂದರೂ ಜಗಳ</p><p>ನೀರ ಗುಳ್ಳೆ ನಿಜವಲ್ಲವೆಂದರೂ ಜಗಳ</p><p>ಪ್ರತಿಯೊಬ್ಬರ ಅನುಭವ ಬೇರೆಬೇರೆ</p><p>ಎಂಬ ವ್ಯತ್ಯಾವಿಲ್ಲದೇ, ಕಚ್ಚಾಟ, ಕಳವಳ</p><p><br /></p><p>ಮುಖವಾಡ ತೊಟ್ಟರೆ ಮುಖವನ್ನು </p><p>ಮರೆಮಾಚಬಹುದು ಮನಸನ್ನಲ್ಲ</p><p>ಮನಸ್ಸಿಲ್ಲದೇ ಒಪ್ಪಿದರದು ನೈಜವಲ್ಲ</p><p>ನಿಜವಲ್ಲದ ವ್ಯವಹಾರದ ಅಗತ್ಯವಿಲ್ಲ</p><p><br /></p><p>ಎದುರಿನವರು ಕನ್ನಡಿಯಲ್ಲ, ಬಿಂಬ ನಮ್ಮದಲ್ಲ </p><p>ಈ ಸತ್ಯ ಮರೆತು, ತಿಳಿಸುವ ಯತ್ನ ಸರಿಯಲ್ಲ</p><p>ಸ್ವತಃ ಅರಿವಾದರೆ ಎಲ್ಲವೂ ಅರ್ಥವಾಗುತ್ತದೆ</p><p>ಒತ್ತಾಯದ ಬೂದಿ ಮುಚ್ಚಿಟ್ಟರೆ ಕೆಂಡ ಕುದಿಯುತ್ತದೆ </p><p><br /></p><p>ತಾಳ್ಮೆ ತಪ್ಪಿದಾಗ ಬೂದಿ ಹಾರಿ ಹೋಗುತ್ತದೆ</p><p>ಮುಚ್ಚಿಟ್ಟ ಕೆಂಡ ಮೇಲೆದ್ದು ಉರಿ ಉಗುಳುತ್ತದೆ</p><p>ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಸುಡುತ್ತದೆ</p><p>ಒಳಗೂ ಹೊರಗೂ ಅಸಾಧ್ಯ ನೋವು ತುಂಬುತ್ತದೆ</p><p><br /></p><p>ಪೊಳ್ಳು ಅಹಂಭಾವ ಬಿಟ್ಟು ನಮ್ಮನ್ನು </p><p>ನಾವೇ ತಕ್ಕಡಿಯಲ್ಲಿ ತೂಗಿಕೊಂಡರೆ</p><p>ಇನ್ನೊಬ್ಬರ ಭಾವನೆ ಅರಿವಿಗೆ ಬರುತ್ತದೆ</p><p>ದಹನದ ಬದಲು ಸುಖ ಸಹನೆಯಿರುತ್ತದೆ</p><p><br /></p><p>ಸ್ವಲ್ಪ ಎಚ್ಚರದಿಂದಿದ್ದು ಭಾವನೆಗೆ</p><p>ಅಂಕುಶವಿಟ್ಟಿದ್ದಿದ್ದರೆ ಎಂಬ ಪರಿತಾಪ</p><p>ಯಾಕಾಗಿ ಈ ಕೋಪ, ಅಸಹ್ಯ ರೂಪ,</p><p>ಆಮೇಲೆ ಸುಮ್ಮನೇ ಪಶ್ಚಾತ್ತಾಪ</p><p><br /></p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-87657034077937513232024-01-28T03:12:00.000-08:002024-02-18T09:23:38.808-08:00 ಅಷ್ಟು-ಇಷ್ಟು<p><br /></p><p>ಗತ್ತು ಗೈರತ್ತು ಹೇರೆತ್ತು ಹೊರುವಷ್ಟು</p><p>ಕಷ್ಟ ಕೈಯಲ್ಲಿ ದೃಷ್ಟಿಯೇ ಬಿರಿವಷ್ಟು</p><p>ನಷ್ಟ ನಲುವತ್ತು ಎಂದಿಗೂ ಮುಗಿಯದಷ್ಟು </p><p>ದೊರೆಯುವುದೆಲ್ಲರಿಗು ಹಣೆಯಲ್ಲಿ ಬರೆದಷ್ಟು</p><p>ನೆಮ್ಮದಿಲಿ ಬದುಕಬೇಕು ಆಯುಸ್ಸು ದೊರೆತಷ್ಟು</p><p><br /></p><p>ಪಡೆದುದರ ಕೊಡುತ್ತಿರು ಅಷ್ಟು-ಇಷ್ಟು</p><p>ಕೆಲಸಕಾರ್ಯಗಳ ಮಾಡು ಕಷ್ಟಪಟ್ಟು</p><p>ಸೇವೆಗಳಲ್ಲಿ ತೊಡಗಿಕೊ ಇಷ್ಟಪಟ್ಟು</p><p>ಅರಿತುದರ ಹಂಚಿಕೊ ಸಾಧ್ಯವಾದಷ್ಟು</p><p>ಸನ್ಮಾರ್ಗದಲ್ಲಿ ನಡೆಯಬೇಕು ಆದಷ್ಟು</p><p><br /></p><p>ಪರರಿಗೆ ಕೇಡು ಬಗೆವವರು</p><p>ಇದ್ದರೆಷ್ಟು ಬಿಟ್ಟರೆಷ್ಟು </p><p>ದಯೆ ದಾಕ್ಷಣ್ಯವಿದ್ದರೆ ಸಾಕಷ್ಟು</p><p>ಸಿಗುವುದೆಲ್ಲವೂ ಬೇಕಾದಷ್ಟು</p><p>ತಿಳಿದುಕೊಳ್ಳಬೇಕು ಇದನೆಲ್ಲ ಬಹಳಷ್ಟು</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-88857424168847569722024-01-26T01:41:00.000-08:002024-02-09T02:23:18.044-08:00ಸ್ವಚ್ಛಂದ - ಹಸಿರು<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhX5z8PeStoRYegGWTqNlHEByMM6SkhBbcvW_OjjAxLYelifxY3U2ash3QRInU3IB7iclF5WUWUXQ6CDpf2ltNUE6il1H6SIz1V8z4BHsrbG2frwyiX2cmGdE8AinUfNLDaJt__gboGrpFRvO3nkO8AX499EDbn0OxvgzNGmjYSzp6rzx6B_jGM/s500/ff4439d48a94f6617fdb7f81b98e692a.jpg" imageanchor="1" style="margin-left: 1em; margin-right: 1em;"><img border="0" data-original-height="357" data-original-width="500" height="175" src="https://blogger.googleusercontent.com/img/b/R29vZ2xl/AVvXsEhX5z8PeStoRYegGWTqNlHEByMM6SkhBbcvW_OjjAxLYelifxY3U2ash3QRInU3IB7iclF5WUWUXQ6CDpf2ltNUE6il1H6SIz1V8z4BHsrbG2frwyiX2cmGdE8AinUfNLDaJt__gboGrpFRvO3nkO8AX499EDbn0OxvgzNGmjYSzp6rzx6B_jGM/w246-h175/ff4439d48a94f6617fdb7f81b98e692a.jpg" width="246" /></a></div><p style="text-align: center;">ಚಿತ್ರ: ಪಿಂಟರೆಸ್ಟ್</p><p><br /></p><p>ಬಾನಲ್ಲಿ ಹಾರುತಿಹ ಹಕ್ಕಿಗಳ ಪುಕ್ಕಗಳಲ್ಲಿ</p><p>ಸ್ವಾತಂತ್ರ್ಯದ ಸಂಭ್ರಮ, ಸಂತೋಷ,</p><p>ತುಂಬಿ ಹರಿವುದು ಅಗಾಧ ವಿಶ್ವಾಸ</p><p><br /></p><p>ಗೂಡಲ್ಲಿ ಬಂಧಿಯಾದ ಹಕ್ಕಿಗಳ ತನುಮನದಲ್ಲಿ</p><p>ಜಡ ತುಂಬಿದ, ಭಯ, ಅವಿಶ್ವಾಸ,</p><p>ಹೊರ ಬೀಳುವುದು ನೋವು ನಿಟ್ಟುಸಿರ ನಿಶ್ವಾಸ</p><p><br /></p><p>ಕಾಡಲ್ಲಿ ಓಡಾಡುವ ಮೃಗಗಳಿಗೆ</p><p>ಊಟಕ್ಕೆ ಉಂಟು ಆಹಾರದ ಸರಪಳಿ</p><p>ಮೃಗಾಲಯದಲ್ಲಿ ಬಂಧಿಯಾದ ಮೃಗಗಳಿಗೆ</p><p>ಕತ್ತು, ಕಾಲಿಗೆ ಬಿಗಿದ ಗಂಟು ಸರಪಳಿ</p><p><br /></p><p>ಬಂಧನದಲ್ಲಿ ಯಾವುದೇ ಗಂಧವಿಲ್ಲ</p><p>ಗಂಧವಿಲ್ಲದಿರೆ ಅಂದ-ಚಂದವಿಲ್ಲ </p><p>ಅವುಗಳ ಅಂದ ಚಂದಗಳ ಕಿತ್ತುಕೊಂಡರೆ </p><p>ಯಾರಿಗೂ, ಎಂದಿಗೂ ಉಳಿಗಾಲವಿಲ್ಲ</p><p><br /></p><p>ಬಂಧಿಸಿಡಬೇಡಿ ಸ್ವಚ್ಛಂದ ಜೀವಿಗಳ</p><p>ಚಿವುಟದಿರಿ ಅಸಹಾಯ ಪ್ರಾಣಗಳ</p><p>ಹಿಸುಕದಿರಿ ಅವುಗಳ ಉಸಿರನ್ನು</p><p>ಬೆಳೆಸೋಣ ನಮ್ಮೊಳಗಿನ ಹಸಿರನ್ನು</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-23107643335393647892024-01-20T04:12:00.000-08:002024-01-25T18:09:43.746-08:00ಅವಳಾಡಿದ ಮಾತುಗಳು<p> </p><p>ಇದ್ದಕ್ಕಿದ್ದಂತೆ ಎದ್ದು ಬಂದು</p><p>ಎದುರು-ಬದುರಾಗಿ ನಿಂದು</p><p>ಕಣ್ಣಲ್ಲಿ ಕಣ್ಣಿಟ್ಟು ದೃಷ್ಟಿ ನೆಟ್ಟು</p><p>ಕಣ್ಣೀರ ಹರಿಯಲು ಬಿಟ್ಟು</p><p><br /></p><p>ಅಸಹನೆಯ ಬದಿಗಿಟ್ಟು</p><p>ಭಾವನೆಗಳ ಕಟ್ಟಿಟ್ಟು</p><p>ಬಯಕೆಗಳ ಬಚ್ಚಿಟ್ಟು</p><p>ಕೈಗಳನು ನನ್ನ ಹೆಗಲ ಮೇಲಿಟ್ಟು</p><p><br /></p><p>ಅಂದು ಅವಳಾಡಿದ ಮಾತುಗಳು</p><p>ಅನುರಣಿಸುತ್ತಿವೆ ಕಿವಿಯಲ್ಲಿ </p><p>ತೊಳಲಾಡುತ್ತಿವೆ ಮನದಲ್ಲಿ</p><p>ಕೇಳುತ್ತಿವೆ ಹೃದಯದ ಬಡಿತದಲ್ಲಿ</p><p><br /></p><p>ಕಾಣುತ್ತಿವೆ ಕನಸಿನಲ್ಲಿ, </p><p>ಹೊಡೆಯುತ್ತಿವೆ ಗೊಂದಲದಲ್ಲಿ</p><p>ಜೊತೆಯಾಗಿವೆ ಪ್ರತೀ ಹೆಜ್ಜೆಯಲ್ಲಿ</p><p>ಅಚ್ಚಾಗಿದೆ ಅಸ್ಥಿ ಮಜ್ಜೆಯಲ್ಲಿ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-57965474634965803182024-01-14T12:10:00.000-08:002024-02-09T21:54:40.456-08:00ಎಳ್ಳು - ಬೆಲ್ಲ<p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgUnP1yUb9E-FjHYPj3_dIs9OT3LIMn5xD4tL0eYhZVr1QfNPP8N6SvO8IDQt3m4CSE5w2pWTLp0JTKwN-ivKI_yzkcMqtBxuOri9RO7CliBBcOUUxPTbBQw01NpLl7syR2ya4WjDb-ystTsmVbztAk_pJJ8TQw3zOtv5wrSFqeJTApJYnEw3jB/s317/20230107_145326-1080x608.jpg" style="margin-left: 1em; margin-right: 1em;"><img border="0" data-original-height="279" data-original-width="317" height="216" src="https://blogger.googleusercontent.com/img/b/R29vZ2xl/AVvXsEgUnP1yUb9E-FjHYPj3_dIs9OT3LIMn5xD4tL0eYhZVr1QfNPP8N6SvO8IDQt3m4CSE5w2pWTLp0JTKwN-ivKI_yzkcMqtBxuOri9RO7CliBBcOUUxPTbBQw01NpLl7syR2ya4WjDb-ystTsmVbztAk_pJJ8TQw3zOtv5wrSFqeJTApJYnEw3jB/w245-h216/20230107_145326-1080x608.jpg" width="245" /></a></div><div class="separator" style="clear: both; text-align: center;">ಚಿತ್ರ: ಗೂಗ್ಲ್ನಿಂದ</div><p><br /></p><p>ಪುಷ್ಯ ಮಾಸ ಶುಕ್ಲ ಪಕ್ಷ ಉತ್ತರಾಯಣ,</p><p>ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣ</p><p>ಋತುಗಳ ಬದಲಾವಣೆಯ ಆರಂಭವಿದು</p><p>ರೈತರಿಗೆ ಬಹು ದೊಡ್ಡ ಸಮಾರಂಭವಿದು</p><p><br /></p><p>ಪೈರ ತೆಗೆಯುವ ಶುಭ ಮುಹೂರ್ತ,</p><p>ಮನೆಮನೆಯಲ್ಲೂ ಸಮೃದ್ಧಿಯ ಸಂಕೇತ</p><p>ಸಂತಸದಲ್ಲಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿ,</p><p>ಮನೆ-ಮನಗಳಲ್ಲಿ ಸಿಹಿ ಸವಿ ಹುಗ್ಗಿ</p><p><br /></p><p>ಇಂದು ಸಂಕ್ರಾಂತಿ, ತೊಡೆವುದೆಲ್ಲಾ ಭ್ರಾಂತಿ</p><p>ಹೊಳೆಯುವುದು ಹೊಸ ಸೂರ್ಯ ಕಾಂತಿ</p><p>ಹೊಸತನ ಹೊಸಮನದೊಂದಿಗೆ ಶಾಂತಿ,</p><p>ತರುವುದು ದುಃಖ ದುಮ್ಮಾನಗಳಿಗೆ ವಿಶ್ರಾಂತಿ</p><p><br /></p><p>ಬನ್ನಿ, ತಿನ್ನಿ, ಸಂಕ್ರಾಂತಿಯ ಎಳ್ಳು-ಬೆಲ್ಲ </p><p>ಸಿಹಿ ತಿಂದ ಬಾಯಿಯಲ್ಲಿ ಕಹಿಯು ಸಲ್ಲ</p><p>ಮುಂದಿರುವುದು ನಮಗೆ ಒಳಿತೇ ಎಲ್ಲಾ </p><p>ಕೆಡುಕಿಗಂತೂ ಇಲ್ಲಿ ಜಾಗವೇ ಇಲ್ಲ</p><p><br /></p><p>ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ</p><p>- ಪೂ.</p><p>೧೫-೦೧-೨೦೨೪</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-80589322796707546642024-01-08T10:59:00.000-08:002024-01-09T09:00:07.693-08:00ಮನಸ್ತಾಪ<p> </p><p>ದೊಡ್ಡವರು ದೊಡ್ಡವರಾಗದಿದ್ದರೆ</p><p>ಚಿಕ್ಕವರು ದೊಡ್ಡವರಾಗ ಬೇಕಾಗುತ್ತದೆ</p><p>ಆದರೆ ಚಿಕ್ಕವರು ದೊಡ್ಡವರಾದರೆ,</p><p>ದೊಡ್ಡವರ ಅಹಂಭಾವಕ್ಕೆ ಪೆಟ್ಟಾಗುತ್ತದೆ </p><p><br /></p><p>ಅಹಂ ಇದ್ದಲ್ಲಿ ಮನವು ಕುರುಡಾಗುತ್ತದೆ</p><p>ಮನವು ಕುರುಡಾದಾಗ ಬುದ್ಧಿ ಕೈಕೊಡುತ್ತದೆ</p><p>ಮಾತಿಗೆ ಮಾತು ಸೇರಿ ಎಲ್ಲವೂ ಕಹಿಯೆನಿಸುತ್ತದೆ</p><p>ಕಹಿಯೇರಿದಂತೇ, ಹೇಳುವುದೆಲ್ಲಾ ವಕ್ರ ಎನಿಸುತ್ತದೆ</p><p><br /></p><p>ಹೇಳುವುದನೆಲ್ಲ ವಕ್ರವಾಗಿ ಸ್ವೀಕರಿಸಿದರೆ</p><p>ಮನಸಿಗೆ ನೋವಾಗುತ್ತದೆ, ನೋವಾದ</p><p>ಮನಸಿಗೆ ಮೌನವೇ ಪ್ರಿಯವೆನಿಸುತ್ತದೆ</p><p>ಮೌನಕ್ಕೆ ಶರಣಾದರೆ ಮನಗಳು ದೂರವಾಗುತ್ತವೆ</p><p><br /></p><p>ನಮ್ಮನ್ನು ನಾವು ಒರೆಗಿಟ್ಟರೆ ನಮ್ಮ ತಪ್ಪು</p><p>ತಿಳಿಯುತ್ತದೆ, ತಿಳಿದ ಮೇಲೆ ತಿದ್ದಿಕೊಂಡರೆ </p><p>ಜೀವನವು ಹೊಳೆಯುತ್ತದೆ, ಇದು ಅರ್ಥವಾಗದಿದ್ದರೆ, </p><p>ಅವರವರ ಪಾಲಿನ ಮನಸ್ತಾಪ ಅಲ್ಲಲ್ಲೇ ಉಳಿಯುತ್ತದೆ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-25705302704752124142024-01-02T07:37:00.000-08:002024-01-04T06:14:49.541-08:00ನೀನ್ಯಾರೋ - ನಾನ್ಯಾರೋ <p><br /></p><p>ನಾನು ಮಗುವಾಗಿದ್ದಾಗ, </p><p>ನೀನು ಯಾರೆಂದೇ ತಿಳಿದಿರಲಿಲ್ಲ</p><p>ನೀನೂ ಕೈಕಾಲಾಡಿಸಿ ಕಿಲಕಿಲ</p><p>ನಗುತ್ತಿದ್ದೆ, ನಾನೂ ನಗುತ್ತಿದ್ದೆ</p><p><br /></p><p>ಬಾಲ್ಯದಲ್ಲಿ ನಿನ್ನ ನೋಡಿ, </p><p>ನಿನ್ನ ಹೊಗಳುವುದ ಕೇಳಿ,</p><p>ನಾನು ಹೊಟ್ಟೆಕಿಚ್ಚು ಪಡುತ್ತಿದ್ದೆ</p><p>ಉರಿಯನ್ನು ಅಮ್ಮನಿಗೆ ಮುಟ್ಟಿಸುತ್ತಿದ್ದೆ</p><p><br /></p><p>ತಾರುಣ್ಯದ ಹೊಸ್ತಿಲಲ್ಲಿ, ನಿನ್ನ ನೋಡಿ</p><p>ಕೀಳರಿಮೆ ಅನುಭವಿಸುತ್ತಿದ್ದೆ</p><p>ನೀನು ಹತ್ತಿರ ಬಂದರೂ ನಾನು</p><p>ದೂರವೇ ಉಳಿಯುತ್ತಿದ್ದೆ</p><p><br /></p><p>ಯೌವನದಲ್ಲಿ, ನಿನ್ನ ನೋಡಿ</p><p>ನಾನು ಆಶ್ಚರ್ಯ ಪಡುತ್ತಿದ್ದೆ </p><p>ನೀನು ನನ್ನಂತೆಯೇ ನಾನು </p><p>ನಿನ್ನಂತೆಯೇ, ಅಂದುಕೊಳ್ಳುತ್ತಿದ್ದೆ</p><p><br /></p><p>ಮಧ್ಯವಯಸ್ಸಿನಲ್ಲಿ, ನಿನ್ನ ನೋಡಿ</p><p>ನಿನ್ನ ಬಗ್ಗೆ ಕೇಳಿ, ಖುಷಿ ಪಡುತ್ತಿದ್ದೆ</p><p>ನಾನು ನಿನ್ನಿಂದ ಕಲಿತೆ ನೀನು</p><p>ನನ್ನಿಂದ ಕಲಿತೆ ಎಂದು ಹೆಮ್ಮೆ ಪಡುತ್ತಿದ್ದೆ</p><p><br /></p><p>ವೃದ್ಧಾಪ್ಯದಲ್ಲಿ, ನಿನ್ನ ನೋಡಿ</p><p>ಎಷ್ಟು ಚಂದ ಈ ಸ್ನೇಹ</p><p>ಎಷ್ಟು ಸುಂದರ ಈ ಬದುಕು</p><p>ಎಂದು ಆನಂದದಿಂದ ಇರುತ್ತಿದ್ದೆ</p><p><br /></p><p>ನಾಳೆ ಉಸಿರು ನಿಂತ ಮೇಲೆ</p><p>ನೀನ್ಯಾರೋ, ನಾನ್ಯಾರೋ </p><p>ಹೊರುವವರು ಯಾರೋ</p><p>ಕಳುಹಿಸಿ ಕೊಡುವವರು ಯಾರೋ</p>Annapoorna Daithotahttp://www.blogger.com/profile/05089949892568990494noreply@blogger.com0tag:blogger.com,1999:blog-34740762.post-32886758491890890932023-12-31T09:14:00.000-08:002024-03-07T13:42:55.130-08:00ಕಸದ ರಾಶಿ<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi9RW-VP1w1cDJaZdsCKK4gvYGVNekMe_NbxOjeowP1ZlrU5PkEu42sdSb3Z0Td3cT-ADAfgbIO_UdXNv1om0qzd8kMGhHGXJreWYOfZRdYp_xrSUdBBwHnHEw7bPul1dF1tHrT7keMe69xtGl0_sD3o-yWQIv7v2k8Tw2KpfHlYr4by77K7c4O/s1500/stock-photo-large-garbage-pile-isolated-on-white-background-global-warming-1138883603.jpg" style="margin-left: 1em; margin-right: 1em;"><img border="0" data-original-height="726" data-original-width="1500" height="205" src="https://blogger.googleusercontent.com/img/b/R29vZ2xl/AVvXsEi9RW-VP1w1cDJaZdsCKK4gvYGVNekMe_NbxOjeowP1ZlrU5PkEu42sdSb3Z0Td3cT-ADAfgbIO_UdXNv1om0qzd8kMGhHGXJreWYOfZRdYp_xrSUdBBwHnHEw7bPul1dF1tHrT7keMe69xtGl0_sD3o-yWQIv7v2k8Tw2KpfHlYr4by77K7c4O/w424-h205/stock-photo-large-garbage-pile-isolated-on-white-background-global-warming-1138883603.jpg" width="424" /></a></div><br /><p>ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ</p><p>ಯಾರೋ ಬಂದು ಎಸೆದ ಊಟ</p><p>ಉಂಡು ನೀನು ಏಕಾಏಕಿ ಉಬ್ಬಿದೆ</p><p><br /></p><p>ಹೆತ್ತವರಿಲ್ಲ ಹೊತ್ತವರಿಲ್ಲ</p><p>ಬಂಧು ಬಳಗ ಸಾಧ್ಯವಿಲ್ಲ</p><p>ಆದರೂ ನೀನು ಬಹಳ ಕೊಬ್ಬಿದೆ</p><p><br /></p><p>ಅನಿವಾರ್ಯದಲ್ಲಿ ಬಳಿಗೆ ಬಂದ ತಪ್ಪಿಗೆ </p><p>ಮೂಗು ಹಿಡಿಸಿದೆ, ಅಯ್ಯೋ ಪಾಪ </p><p>ಎಂದವರಿಗೆ ಮೂರೂ ಲೋಕ ತೋರಿಸಿದೆ</p><p><br /></p><p>ಒಟ್ಟು ಮಾಡಿ ಕೊಟ್ಟುದೆಲ್ಲ ಹೊಟ್ಟೆಗೆ ಹಾಕಿದೆ</p><p>ಬೆಟ್ಟು ಮಾಡಿ ತೋರಿದರೆ ಸಿಟ್ಟು ಮಾಡದೇ </p><p>ಇನ್ನಷ್ಟು ಬೆಳೆದೆ, ಬೆಳೆಯುತ್ತಲೇ ಹೋದೆ</p><p><br /></p><p>ನೀನ್ಯಾರ ಪಾಪ, ನಿನಗಿಹುದೇ ಶಾಪ</p><p>ನಿನ್ನ ಪೋಷಿಸುವರು ಹಲವರು ಆದರೆ </p><p>ಮೂಸಿ ನೋಡರು, ಅದಕೇ ನಿನಗಿಲ್ಲ ಯಾರೂ</p><p><br /></p><p>ಕಳೆದುಕೋ ನಿನ್ನ ಬೆಳೆವಣಿಗೆಯ ಶಕ್ತಿ </p><p>ಬೇಗ ಕಣ್ಮರೆಯಾಗಿ ಅಲ್ಲಿಂದ, </p><p>ನೀಡು ಎಮಗೆ ನಿನ್ನಿಂದ ಮುಕ್ತಿ</p>Annapoorna Daithotahttp://www.blogger.com/profile/05089949892568990494noreply@blogger.com0