ಅರೆ ಶತಕದ ಮೂರನೆಯ ಮೆಟ್ಟಿಲು
ಈ ಜಗವಹುದು ಬಲು ಅಚ್ಚರಿಯ ತೊಟ್ಟಿಲು
ಸೋಲಿಲ್ಲ ಗೆಲುವಿಲ್ಲ ಇದ್ದರೂ ಇಲ್ಲಿ ಅದೆಲ್ಲ ಸಲ್ಲ
ಅರಿತರೆ ಸಿಹಿ-ಕಹಿ, ಜೀವನವಹುದು ಬೇವು ಬೆಲ್ಲ
ಬೆರೆತರೆ ಸ್ನೇಹ-ಸಂಬಂಧ, ತಕರಾರಿಲ್ಲ
ಇಲ್ಲವಾದಲ್ಲಿ ಕಿರಿಕಿರಿ ಎಂದಿಗೂ ತಪ್ಪಿದ್ದಲ್ಲ
ದಾರಿಯಲ್ಲಿ ಕಲ್ಲುಮುಳ್ಳು ಇರದಿರುವುದಿಲ್ಲ
ಎದುರಿಸಿ ನಿಲ್ಲದಿರೆ ಸುಲಭ ಪರಿಹಾರವಿಲ್ಲ
ಪ್ರಪಂಚದಲ್ಲಿ ಸಂಕಟ ಮುಗಿಯುವುದಿಲ್ಲ
ನಮಗೆ ನಾವೇ ನೆಮ್ಮದಿ ಪಡೆಯಬೇಕಲ್ಲ
ದುಃಖಿಸಿದರೆ ಎಂದಿಗೂ ಧೈರ್ಯ ಬರುವುದಿಲ್ಲ
ಧೈರ್ಯದಿಂದಿದ್ದರೆ ನೆಲ ಕುಸಿಯುವುದಿಲ್ಲ
ಬಯಕೆಯ ಬಳ್ಳಿಯ ಮಿತಿಯಲ್ಲಿ ಬಿಗಿದರೆ
ಬದುಕಲ್ಲಿ ಬೆಳೆಯುವುದು ಭರವಸೆಯ ಹಸಿರು
ಭಗವಂತನ ದಯೆಯ ಕೈ ತಲೆ ಮೇಲೆ ಇದ್ದರೆ
ಬಾಳ ಬಟ್ಟೆಯಲಿ ಸದಾ ನೆಮ್ಮದಿಯ ಉಸಿರು
No comments:
Post a Comment