ಇರುವುದು ನಮಗೆ ನಾಲ್ಕು ದಿನ
ಉರಿವುದು ತನು ಮನ ಧನ
ದ್ವೇಷ ಅಪನಂಬಿಕೆಗಳು ಹೀನ
ಆದರೂ ಕೊಡುವರುನ್ನತ ಸ್ಥಾನ
ಪ್ರೀತಿ ಒಲವು ತುಂಬಿದ ಜೀವನ
ದೊರೆವುದು ಎಷ್ಟೊಂದು ಕಠಿಣ
ಅಹಂ ಹೆಚ್ಚಿಸಿ ಬೀಗುವುದು ಮನ
ಇರುವುದನ್ನು ಕಳೆವುದು ಮೂರ್ಖತನ
ಅವರಿವರ ಕಡೆಗೆ ಅತೀವ ಗಮನ
ನಮ್ಮದನ್ನು ಹೇಳಿದರೆ ಅಸಮಾಧಾನ
ತಾಳಕ್ಕೆ ಕುಣಿದರೆ ಮಾತ್ರ ಸನ್ಮಾನ
ಅಂತಿರುವುದಷ್ಟೇ ನಮ್ಮ ಜಾಣತನ
ವರ್ಷಗಳು ಉರುಳುವುದು ದಿನ ಸಮಾನ
ಬುದ್ಧಿ ಬರುವುದಂತೂ ಬಲು ನಿಧಾನ
ಯಾಕೆ ಬೇಕು ಹುಳಿ ರಗಳೆಗಳ ಜ್ಞಾನ
ಭಗವತ್ಪಾದಕ್ಕೆ ಸಮರ್ಪಣೆ ಈ ಪ್ರಾಣ
No comments:
Post a Comment