Monday, March 11, 2024

ಅನುಭವ ಸತ್ಯ

 

ಗೋಡೆ ಬದಿಯ ಮಣ್ಣಿಗೆ ನೀರೆರಚಿ ನೋಡಿ

ಮಣ್ಣು ಸಿಡಿದು ಗೋಡೆ ಕೆಸರಾಗುತ್ತದೆ

ಮನಸಿಗೆ ಒಂಥರಾ ಖುಷಿ ಎನಿಸುತ್ತದೆ


ಅದೇ ಗೋಡೆಗೆ ನೀರೇರಚಿ ನೋಡಿ

ಸಂಪೂರ್ಣ ತೊಳೆದು ಶುಭ್ರವಾಗುತ್ತದೆ

ಮೊದಲಿಗಿಂತ ಮಿಗಿಲಾದ ಖುಷಿ ಸಿಗುತ್ತದೆ


ತಿಳಿಗೊಳಕ್ಕೊಂದು ಕಲ್ಲೆಸೆದು ನೋಡಿ

ಅಲೆಅಲೆಯಾಗಿ ಉಂಗುರಗಳು ಏಳುತ್ತವೆ 

ಮನಸಿಗೆ ಮುದವೆನಿಸುತ್ತದೆ


ಅಲೆಯ ಉಂಗುರಗಳು ಅಳಿದು

ಕೊಳವು ತಿಳಿಯಾಗುವುದನ್ನು ನೋಡಿ

ಮನಸ್ಸು ತಲ್ಲಣ ರಹಿತ ಸುಖ ಪಡೆಯುತ್ತದೆ


ತೊಳೆದಾಗ, ತಿಳಿಗೊಂಡಾಗ ದೊರಕುವುದು

ಕಲಕಿ ಕದಡಿದಾಗ, ಕೆಸರೆರಚಿದಾಗ ಸಿಗುವುದಿಲ್ಲ 

ಎಂಬದು ಅನುಭವ ಸತ್ಯ, ಅದನು ಅರಿತು ನೋಡಿ

No comments: