Monday, January 08, 2024

ಮನಸ್ತಾಪ

 

ದೊಡ್ಡವರು ದೊಡ್ಡವರಾಗದಿದ್ದರೆ

ಚಿಕ್ಕವರು ದೊಡ್ಡವರಾಗ ಬೇಕಾಗುತ್ತದೆ

ಆದರೆ ಚಿಕ್ಕವರು ದೊಡ್ಡವರಾದರೆ,

ದೊಡ್ಡವರ ಅಹಂಭಾವಕ್ಕೆ ಪೆಟ್ಟಾಗುತ್ತದೆ 


ಅಹಂ ಇದ್ದಲ್ಲಿ ಮನವು ಕುರುಡಾಗುತ್ತದೆ

ಮನವು ಕುರುಡಾದಾಗ ಬುದ್ಧಿ ಕೈಕೊಡುತ್ತದೆ

ಮಾತಿಗೆ ಮಾತು ಸೇರಿ ಎಲ್ಲವೂ ಕಹಿಯೆನಿಸುತ್ತದೆ

ಕಹಿಯೇರಿದಂತೇ, ಹೇಳುವುದೆಲ್ಲಾ ವಕ್ರ ಎನಿಸುತ್ತದೆ


ಹೇಳುವುದನೆಲ್ಲ ವಕ್ರವಾಗಿ ಸ್ವೀಕರಿಸಿದರೆ

ಮನಸಿಗೆ ನೋವಾಗುತ್ತದೆ, ನೋವಾದ

ಮನಸಿಗೆ ಮೌನವೇ ಪ್ರಿಯವೆನಿಸುತ್ತದೆ

ಮೌನಕ್ಕೆ ಶರಣಾದರೆ ಮನಗಳು ದೂರವಾಗುತ್ತವೆ


ನಮ್ಮನ್ನು ನಾವು ಒರೆಗಿಟ್ಟರೆ ನಮ್ಮ ತಪ್ಪು

ತಿಳಿಯುತ್ತದೆ, ತಿಳಿದ ಮೇಲೆ ತಿದ್ದಿಕೊಂಡರೆ 

ಜೀವನವು ಹೊಳೆಯುತ್ತದೆ, ಇದು ಅರ್ಥವಾಗದಿದ್ದರೆ, 

ಅವರವರ ಪಾಲಿನ ಮನಸ್ತಾಪ ಅಲ್ಲಲ್ಲೇ ಉಳಿಯುತ್ತದೆ

No comments: