Wednesday, December 13, 2023

ಚರ್ವಿತಚರ್ವಣ

 

ಇಲ್ಲಿಗೇ ಮುಗಿಯಿತೇ ನನ್ನ ಪದ ಭಾಂಡಾರ

ಹುಟ್ಟುತ್ತಿಲ್ಲ ಮನದೊಳಗೆ ಪದಗಳ ಸಾರ

ಸಿಕ್ಕುತಿಲ್ಲ ಸರಿಯಾದ ಸಾಲುಗಳ ದಾರ

ಹೀಗಾದರೆ ಖಂಡಿತ ನಾನಾಗಲಾರೆ ಉದ್ಧಾರ


ಹೊಸತನದ ಹಾದಿಯಲಿ ಉತ್ಸಾಹದ ಪೂರ

ಇಷ್ಟು ದಿನ ಹರಿಯುತ್ತಿತ್ತು ಬಳಸಿ ಸಕಲ ದ್ವಾರ

ಸುರಿಯುತಿತ್ತು ಎಲ್ಲೆಡೆಯಲ್ಲೂ ಸವಿಸ್ತಾರ

ಬೆರೆತು ಹೃದಯದಿ ಸೂಚಿಸುತ್ತಿತ್ತು ಪರಿಹಾರ


ಇದಕ್ಕೇ ಹೇಳುವುದು, ಬರೆಯಬೇಕು, 

ಬರೆಯುವುದರೊಂದಿಗೆ ಕಲಿಯಬೇಕು, ಕಲಿಯದೇ

ಬರೆಯುತಿದ್ದರೆ ಆಗುವುದು ಚರ್ವಿತಚರ್ವಣ,

ಓದುಗ ವೃಂದ ಬಿಡುವುದು ನಮಗೆ ತರ್ಪಣ

No comments: